ಸುನೀಲ್ ಕುಮಾರ್ ದೇಸಾಯಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ, ಬರಹಗಾರ ಮತ್ತು ನಿರ್ಮಾಪಕ. ಅವರು ಥ್ರಿಲ್ಲರ್ ಮತ್ತು ರೊಮ್ಯಾನ್ಸ್ ಚಲನಚಿತ್ರಗಳನ್ನು ಬರೆದು ನಿರ್ದೇಶಿಸಿದ್ದಾರೆ. ಅವರು ಅತ್ಯುತ್ತಮ ಚಿತ್ರಕಥೆ ಮತ್ತು ಅತ್ಯುತ್ತಮ ಸಂಭಾಷಣೆ ವಿಭಾಗಗಳಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು (೪ ಬಾರಿ) ಗೆದ್ದಿದ್ದಾರೆ. ಅವರು ೪ ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ದೇಸಾಯಿ ದಕ್ಷಿಣ ಭಾರತದ ಸಂಗೀತಗಾರರಾದ ಇಳಯರಾಜಾ, ಹಂಸಲೇಖ ಮತ್ತು ಗುಣಸಿಂಗ್ ಅವರೊಂದಿಗೆ ಕೆಲಸ ಮಾಡಿದ್ದಾರೆ. == ಆರಂಭಿಕ ಜೀವನ == ದೇಸಾಯಿಯವರು ೧೯೫೫ ರಲ್ಲಿ ಕರ್ನಾಟಕದ ಬಿಜಾಪುರದಲ್ಲಿ ಜನಿಸಿದರು. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಿಜಾಪುರದಲ್ಲಿ ಮತ್ತು ಉನ್ನತ ಶಿಕ್ಷಣವನ್ನು ಪುಣೆಯಲ್ಲಿ ಪಡೆದರು. ಇವರು ಕಾಶಿನಾಥ್ ಮತ್ತು ನಂತರ ಸುರೇಶ್ ಹೆಬ್ಳೀಕರ್ ಅವರ ಸಹಾಯಕರಾಗಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. == ವೃತ್ತಿಜೀವನ == ದೇಸಾಯಿ ೧೯೮೯ ರಲ್ಲಿ ತರ್ಕ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರ ನಂತರದ ಚಲನಚಿತ್ರಗಳಾದ ನಿಷ್ಕರ್ಷ, ಬೆಳದಿಂಗಳ ಬಾಲೆ ಮತ್ತು ನಮ್ಮೂರ ಮಂದಾರ ಹೂವೆ ಅವರು ೧೯೯೦ ರ ದಶಕದ ಅತ್ಯಂತ ನವೀನ ಮತ್ತು ಪ್ರಭಾವಶಾಲಿ ನಿರ್ದೇಶಕ ಎಂಬ ಖ್ಯಾತಿಯನ್ನು ಗಳಿಸುವಂತೆ ಮಾಡಿತು. ಮೂರು ವರ್ಷಗಳ ಅನುಪಸ್ಥಿತಿಯ ನಂತರ, ದೇಸಾಯಿ ಅವರು ನಾಲ್ಕು ಚಲನಚಿತ್ರಗಳನ್ನು ತಮ್ಮ ಕೈಯಲ್ಲಿ ಹೊಂದಿದ್ದಾರೆ ಎಂದು ಘೋಷಿಸಿದ್ದರು. ಇವರು ೨೦೧೯ ರಲ್ಲಿ ಉದ್ಘರ್ಷ ಎಂಬ ಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ. == ಸುನೀಲ್ ಕುಮಾರ್ ನಿರ್ದೇಶನದ ಚಲನಚಿತ್ರಗಳು == == ಉಲ್ಲೇಖಗಳು ==